ಯಕ್ಷಗಾನ ಅವಧಿ : ಮಂದಾರ್ತಿಯಲ್ಲಿ ಚಿಂತನಾ ಸಭೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಆಗಸ್ಟ್ 2 , 2013
|
ಬ್ರಹ್ಮಾವರ , ಆಗಸ್ಟ್ 2 , 2013
|
ಯಕ್ಷಗಾನ ಅವಧಿ : ಮಂದಾರ್ತಿಯಲ್ಲಿ ಚಿಂತನಾ ಸಭೆ
ಬ್ರಹ್ಮಾವರ :
ಯಕ್ಷಗಾನದ ಪ್ರದರ್ಶನ ಅವಧಿ ಕುರಿತು ಚಿಂತನ ಮಂಥನ ನಡೆಸಲು ಆ.7ರ ಬೆಳಗ್ಗೆ 11.30ಕ್ಕೆ ಶ್ರೀಕ್ಷೇತ್ರದ ಕಲ್ಯಾಣ ಮಂಟಪದಲ್ಲಿ ಆಸಕ್ತರು, ಕಲಾಭಿಮಾನಿಗಳು, ಕಲಾವಿದರು, ಚಿಂತಕರು, ಸೇವಾರ್ಥಿಗಳ ಸಭೆಯನ್ನು ಆಯೋಜಿಸಲಾಗಿದೆ.
ಯಕ್ಷಗಾನವನ್ನು ಇಡೀ ರಾತ್ರಿ ವೀಕ್ಷಿಸುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಅವಧಿ ಪರಿಷ್ಕರಣೆ ಕುರಿತು ನಿರ್ಣಯ ತೆಗೆದುಕೊಳ್ಳಲು ಸಭೆಯನ್ನು ನಡೆಸಲಾಗುತ್ತಿದೆ. ಆಸಕ್ತರು ಪಾಲ್ಗೊಳ್ಳಬೇಕೆಂದು ದೇವಸ್ಥಾನದ ಆಡಳಿತೆ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ ತಿಳಿಸಿದ್ದಾರೆ.
|
|
|